ಉಡುಪಿ : ಮಂಗಳೂರಿನ ಆಸ್ಪತ್ರೆಯೊಂದರ ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರು ಶೀಘ್ರ ಗುಣಮುಖರಾಗಲೆಂದು ಜಯಶೆಟ್ಟಿ ಬನ್ನಂಜೆಯವರ ನೇತೃತ್ವದಲ್ಲಿ ಉಡುಪಿ ರಥಬೀದಿಯ ಶ್ರೀರಾಘವೇಂದ್ರಮಠದಲ್ಲಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಮೃತ ಶೆಣೈ, ಬ್ರಹ್ಮಾವರ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಕೀಳಂಜೆ, ಗಣೇಶ್ ರಾಜ್ ಸರಳೇಬೆಟ್ಟು, ಗಣೇಶ್ ಶೆಟ್ಟಿ ಕೀಳಂಜೆ, ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ರಾಜ್ಯ ಸಂಚಾಲಕ ಬಿ,ಕೆ ರಾಜ್ ಕೆಮ್ಮಣ್ಣು , ಸದಾನಂದ ಪೂಜಾರಿ ಪರ್ಕಳ, ವಾಲ್ಟರ್ ಡಿಸೋಜ ಕೊಳಲಗಿರಿ, ಉಡುಪಿ ಮಾಜಿ ನಗರಸಭಾ ಸದಸ್ಯ ಸುರೇಶ್ ಶೇರಿಗಾರ್ ಬೈಲಕೆರೆ, ಎ. ಜೆ ಕಾಡು ಬೆಟ್ಟು ರವರ ಸುಪುತ್ರ ಉಪಸ್ಥಿತರಿದ್ದರು.
Advertisement. Scroll to continue reading.
