ವರದಿ : ದಿನೇಶ್ ರಾಯಪ್ಪನಮಠ
ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ವತಿಯಿಂದ ಗಿಡ ಬೆಳೆಸು-ನಾಡು ಉಳಿಸು ಕಾರ್ಯಕ್ರಮ ಇತ್ತೀಚಿಗೆ ಸಾಸ್ತಾನದಲ್ಲಿ ನಡೆಯಿತು. ಖ್ಯಾತ ಪರಿಸರ ಪ್ರೇಮಿ ಮಧುಸೂದನ ಹೇರೂರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು ಹಾಗೂ ಸಸಿಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷೆ ಯಶೋದ.ಸಿ.ಹೊಳ್ಳ ವಹಿಸಿದ್ದರು. ಕಾರ್ಯದರ್ಶಿ ವಿಘ್ನೇಶ್ವರ ಅಡಿಗ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಜಿಲ್ಲಾ ಯೋಜನೆ ಸಭಾಪತಿ ಪಾಂಡುರಂಗ ಗಾಣಿಗ ವಂದಿಸಿದರು. ಕಾರ್ಯಕ್ರಮದ ಮೊದಲಿಗೆ ರೋಟರಿ ಅಧ್ಯಕ್ಷ ಸದಸ್ಯರು ಮತ್ತು ಸರಕಾರಿ ಪ್ರೌಢಶಾಲೆ ಗುಂಡ್ಮಿ ಯು ಮುಖ್ಯೋಪಾಧ್ಯಾಯ ಸತೀಶ್ ಐತಾಳ್, ಸಹಶಿಕ್ಷಕರು ಗಿಡಗಳನ್ನು ನೆಟ್ಟು ಪ್ರಾತ್ಯಕ್ಷಿಕೆ ನಡೆಸಿದರು.
Advertisement. Scroll to continue reading.
