ವರದಿ : ಶ್ರೀದತ್ತ ಹೆಬ್ರಿ
ಬೆಂಗಳೂರಿನ ರಾಜಭವನ ಆವರಣದಲ್ಲಿ ಬುಧವಾರ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಹೆಬ್ರಿಯ ಬಿಜೆಪಿ ಪಕ್ಷದ ವತಿಯಿಂದ ಹೆಬ್ರಿ ಪೇಟೆಯ ಬಸ್ ನಿಲ್ದಾಣದ ಲಯನ್ಸ್ ವೃತ್ತದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿ ನೂತನ ಸರಕಾರಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಪಕ್ಷದ ಮುಖಂಡರಾದ ಗುರುದಾಸ್ ಶೆಣೈ, ಜ್ಯೋತಿ ಹರೀಶ್ ರಮೇಶ್ ಕುಮಾರ್ ಶಿವಪುರ . ಸಿಎಂ ಪ್ರಸನ್ನ ಶೆಟ್ಟಿ. ಎಚ್ .ಸತೀಶ್ ಪೈ. ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ. ಮಾಜಿ ಅಧ್ಯಕ್ಷರಾದ ಎಚ್. ಕೆ ಸುಧಾಕರ್. ಸುಧಾಕರ್ ಹೆಗ್ಡೆ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು .
Advertisement. Scroll to continue reading.
