ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮ ಮಂಗಳವಾರ ಬಾರಕೂರು ಕೂಡ್ಲಿ ಜನಾರ್ದನ ನಿಲಯದ ಉಡುಪರ ಮನೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾರಕೂರು ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಆರ್ಥಿಕವಾಗಿ ಮತ್ತು ಆರೋಗ್ಯವಾಗಿ ಇರಲು ಕೃಷಿ ಪೂರಕ. ಬೆಳೆಗಳ ಬಗ್ಗೆ ಮತ್ತು ಕೃಷಿಯ ಬಗ್ಗೆ ಸರಿಯಾದ ಮಾಹಿತಿ ಪಡೆದು ಕೃಷಿ ಮಾಡಿದಲ್ಲಿ ಲಾಭದಾಯಕವಾಗುತ್ತದೆ ಎಂದರು.

ರಾಮಕೃಷ್ಣ ಶರ್ಮ ಬಂಟಕಲ್ಲು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿ, ಯಾವೂದೇ ಕೃಷಿಯನ್ನು ಮಾಡುವಾಗ ಸರಿಯಾದ ಬೀಜ, ಬಿತ್ತನೆ, ಗೊಬ್ಬರ, ಮತ್ತು ನೀರಿನ ನಿರ್ವಹಣೆಯಿಂದ ವೈಜ್ಞಾನಿಕವಾಗಿ ಮಾಡಿದಲ್ಲಿ ಕೃಷಿಗೆ ಮಾಡಲಾದ ಖರ್ಚಿನಲ್ಲಿ ಶೇಕಡ 75 ಲಾಬಾಂಶ ಪಡೆಯಬಹುದು. ಕೃಷಿಕ ಇಂದು ಬೀಜ, ಗೊಬ್ಬರ ಮತ್ತು ಸುಣ್ಣ ಸೇರಿದಂತೆ ರೈತರಿಗೆ ಬೇಕಾಗುವ ವಸ್ತುವನ್ನು ಪಡೆಯಲು ಹೋರಾಟದ ಹಾದಿ ಹಿಡಿಯಬೇಕಾದ ಸ್ಥಿತಿ ಬಂದಿದೆ ಎಂದರು.
ರೈತರಿಗೆ ಉಪಯುಕ್ತವಾಗುವ ಅನೇಕ ಉಪಯುಕ್ತ ಮಾಹಿತಿಯನ್ನು ನೀಡಿದರು.


ಈ ಸಂದರ್ಭ ಪ್ರಗತಿ ಪರ ಕೃಷಿಕರಾದ ಶ್ರೀನಿವಾಸ ಉಡುಪ , ಮಹಾಬಲೇಶ್ವರ ಭಟ್, ಡಾ ವೆಂಕಟರಮಣ ಉಡುಪ, ಬಾಬು ನಾಯ್ಕ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು. ಹಲವಾರು ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.